ಅಲ್ಲಿ
ಕೂಗಿದೆ,ಅಳಲಿದೆ
ಕರುಳಿನ ತೊಳಲಾಟವಿದೆ
ಅದೆಷ್ಟೋ ವರ್ಷಗಳ ತಪಸ್ಸಿದೆ
ಕೊಳೆಯಾದ ಪಂಚೆಯ ಎಡೆಯಲ್ಲಿ,
ಉಸಿರುಗಟ್ಟಿದ ಆಸೆಗಳಿವೆ !
ಅಲ್ಲಿ,
ಬದುಕು ಬಿದಿಗೆ ತುಂಬಲಿಲ್ಲ,
ಬಸಿರು ಬದುಕಲಿಲ್ಲ
ಬಸಿಯಲಿಲ್ಲ , ಬೆಸೆಯಲಿಲ್ಲ
ಬಣ್ಣಿಸುವಷ್ಟು ಬಣ್ಣಗಳಿಲ್ಲ
ಆದರೂ ಇವರು ಸಮರ್ಥರು!
ಇಲ್ಲಗಳನ್ನು ಅಲ್ಲಗಳೆದು
ಇಂಗಿದ ಇಂಗಿತಗಳ ಜೊತೆಗೆ
ರಾಜಿಮಾಡಿದ್ದಾರೆ!
ನೀವು ಕೊಡುವ ಮಾತು,
ಮೌನವಾಗಿ ಮರೆತಿದ್ದಾರೆ,
ಅವರ ಬೆವರಿನ ಘಮಕೆ
ನೀವು ಬಂಗಲೆ ಕಟ್ಟಿದರೂ
ಅವರು ದನಿ ಎತ್ತಲಾರರು,
ರಾಜೀನಾಮೆ ಬಯಸಲಾರರು!
ಈ ಅವರುಗಳು ಯಾರೆಂದು ಪ್ರಶ್ನೆ ಯೇ ಏಳುವುದಿಲ್ಲ
ಇವರು ಸರಾಸರಿಯ ಅಂಕಿಅಂಶಗಳಲ್ಲಿ ಸಾರಾಸಗಟು
ಸಪಾಯಿಯಾಗಿದ್ದಾರೆ
ಆದರೂ ಸಿಪಾಯಿಯಂತಿದ್ದಾರೆ
ಬೆಳವಣಿಗೆಗೆ ಬೆಳೆಯದೇ ಹೋದರು, ಬಲಿತಿದ್ದಾರೆ
ಮತ್ತು ನಿಮ್ಮನ್ನು ಬೆಳೆಸುತ್ತಿದ್ದಾರೆ!!
~Geethalakshmi Kochi
~Geethalakshmi Kochi
Madhyamaradaru samrtharu,sapayiyadaru sipayigalu
ReplyDeleteBeautiful