Wednesday 1 April 2020

ಅವರೆಂಬ ಮಧ್ಯಮರು

ಅಲ್ಲಿ 
ಕೂಗಿದೆ,ಅಳಲಿದೆ
 ಕರುಳಿನ ತೊಳಲಾಟವಿದೆ
ಅದೆಷ್ಟೋ ವರ್ಷಗಳ ತಪಸ್ಸಿದೆ
ಕೊಳೆಯಾದ ಪಂಚೆಯ ಎಡೆಯಲ್ಲಿ, 
ಉಸಿರುಗಟ್ಟಿದ ಆಸೆಗಳಿವೆ !

ಅಲ್ಲಿ,
ಬದುಕು ಬಿದಿಗೆ ತುಂಬಲಿಲ್ಲ, 
ಬಸಿರು ಬದುಕಲಿಲ್ಲ
ಬಸಿಯಲಿಲ್ಲ , ಬೆಸೆಯಲಿಲ್ಲ
ಬಣ್ಣಿಸುವಷ್ಟು ಬಣ್ಣಗಳಿಲ್ಲ

 ಆದರೂ ಇವರು ಸಮರ್ಥರು!
ಇಲ್ಲಗಳನ್ನು ಅಲ್ಲಗಳೆದು
ಇಂಗಿದ ಇಂಗಿತಗಳ ಜೊತೆಗೆ 
ರಾಜಿಮಾಡಿದ್ದಾರೆ!
ನೀವು ಕೊಡುವ ಮಾತು,
ಮೌನವಾಗಿ ಮರೆತಿದ್ದಾರೆ,
ಅವರ ಬೆವರಿನ ಘಮಕೆ
ನೀವು  ಬಂಗಲೆ ಕಟ್ಟಿದರೂ
ಅವರು ದನಿ ಎತ್ತಲಾರರು,
ರಾಜೀನಾಮೆ ಬಯಸಲಾರರು!

ಈ ಅವರುಗಳು ಯಾರೆಂದು ಪ್ರಶ್ನೆ ಯೇ ಏಳುವುದಿಲ್ಲ
ಇವರು ಸರಾಸರಿಯ ಅಂಕಿಅಂಶಗಳಲ್ಲಿ ಸಾರಾಸಗಟು
ಸಪಾಯಿಯಾಗಿದ್ದಾರೆ
ಆದರೂ ಸಿಪಾಯಿಯಂತಿದ್ದಾರೆ
ಬೆಳವಣಿಗೆಗೆ ಬೆಳೆಯದೇ ಹೋದರು, ಬಲಿತಿದ್ದಾರೆ
ಮತ್ತು ನಿಮ್ಮನ್ನು ಬೆಳೆಸುತ್ತಿದ್ದಾರೆ!!

~Geethalakshmi Kochi

1 comment:

  1. Madhyamaradaru samrtharu,sapayiyadaru sipayigalu
    Beautiful

    ReplyDelete

ಗೀತಳ ಗೀಚು

1.) ಬದುಕು ಬಣ್ಣಗಳಲ್ಲಿ.... 2)ಕಲೆಗೆ ದೃಷ್ಟಿಯ ಪರಿವೆಯಿಲ್ಲ ಅದು ದೃಷ್ಟಿಕೋನ !  3.)ಆಯಾಮದ ಅನುಮಾನ ಅನುಭೂತಿಗೇಕೆ ? 4.)ಸಾಲುಗಳಲ್ಲಿಲ್ಲದ ಅಚ್ಚುಕಟ್ಟು ಸರಳ ರೇಖೆಯಲ್ಲ...