Monday 20 May 2019

.................

ಭಾವಗಳ ಭಾವನೆಗೆ
ಲಯವಾಗೊ ಭಯವನ್ನು
ಅರಗಿಸದೆ ಅಡಗಿಸಿದೆ

ಬಂಧನಗಳಿಲ್ಲದ ಬದುಕಿನ
ಗಲ್ಲಿ ಗಲ್ಲಿ ,
ತಿರುಗಿದೆ ಬರಿಗಾಲಲ್ಲಿ

ಆ ಗಲ್ಲಿಗಳಲ್ಲಿ ದುಃಖ ಮಾತನಾಡಲಿಲ್ಲ
ಖುಷಿಗೆ ಕಣ್ಣು ಕಾಣುವುದಿಲ್ಲ
ಏಕತಾನತೆಯೊಂದು
ಹುಚ್ಚೆದ್ದು ಕುಣಿಯುತ್ತಿತ್ತು
ಹೂತಿಟ್ಟ ಭಾವನೆಗಳ ಕೆಣಕುತ್ತಿತ್ತು

ನನಗೆ ಸೋಲು ಒಗ್ಗಲಿಲ್ಲ
ನಾನೂ ರಟ್ಟೆ ತಟ್ಟಿದೆ
ಯುದ್ಧಕ್ಕೆ ಬದ್ಧಳಾದೆ
ಅಂತರಾತ್ಮ ಇಂದು ರಣರಂಗ

ಆದರೆ ಸಂಘರ್ಷದಲ್ಲಿ ಕೇವಲ
ನಾವೀರ್ವರಲ್ಲದೆ ಹಲವರ ದನಿಯಿತ್ತು
ಪ್ರತಿ ಗಲ್ಲಿಯ ಗುಲ್ಲಿತ್ತು

ಅಂತಃಕರಣ ಮತ್ತೆ ಮಿಡಿಯಿತು
ಓಹ್! ನಾನು ಬಂಧಿಸಿದ್ದು ಬಂಧನಗಳನಲ್ಲ
ಬಂಧಗಳನ್ನು!

ರಕ್ತಸಿಕ್ತ ಭಾವನೆಗಳನ್ನು ಕಂಡು
ಮುಲಾಮು ಹಚ್ಚಲು ಶುರುವಿಟ್ಟೆ
ಸಂಘರ್ಷದಲಿ ಸೋಲೊಪ್ಪಿದೆ
ಆದರೂ ದುಃಖವಿಲ್ಲ
ಗೆದ್ದೆ ಅನಿಸುತ್ತಿದೆ!!!!

~Geethalakshmi Kochi

No comments:

Post a Comment

ಗೀತಳ ಗೀಚು

1.) ಬದುಕು ಬಣ್ಣಗಳಲ್ಲಿ.... 2)ಕಲೆಗೆ ದೃಷ್ಟಿಯ ಪರಿವೆಯಿಲ್ಲ ಅದು ದೃಷ್ಟಿಕೋನ !  3.)ಆಯಾಮದ ಅನುಮಾನ ಅನುಭೂತಿಗೇಕೆ ? 4.)ಸಾಲುಗಳಲ್ಲಿಲ್ಲದ ಅಚ್ಚುಕಟ್ಟು ಸರಳ ರೇಖೆಯಲ್ಲ...