Tuesday 18 August 2020

ಗೀತಳ ಗೀಚು



1.) ಬದುಕು ಬಣ್ಣಗಳಲ್ಲಿ....


2)ಕಲೆಗೆ ದೃಷ್ಟಿಯ ಪರಿವೆಯಿಲ್ಲ

ಅದು ದೃಷ್ಟಿಕೋನ ! 


3.)ಆಯಾಮದ ಅನುಮಾನ ಅನುಭೂತಿಗೇಕೆ ?


4.)ಸಾಲುಗಳಲ್ಲಿಲ್ಲದ ಅಚ್ಚುಕಟ್ಟು ಸರಳ ರೇಖೆಯಲ್ಲಿತ್ತು

ನನಗೆ ಮಾತ್ರ ಅಂಕುಡೊಂಕಿನ ಸಾಲು ನೆಚ್ಚಿತು !


5.)ಪರಿಸರವಷ್ಟೇ ಸಮತೋಲನ, ಮಿಕ್ಕಿದ್ದೆಲ್ಲ ಆಂದೋಲನ.


6.)ಪಾತರಗಿತ್ತಿಯ ಪುಕ್ಕ ಹತ್ತಿದ ಪರಿವೆಗೆ ರೂಪಾಂತರದ ರೋಮಾಂಚನ


7.)ಜಟಿಲತೆಯ ಪಥದಲ್ಲಿ ಪುಟಿದೆದ್ದ ಚಿಟಿಕೆ ಕಿಡಿ

ಮತ್ತೆ ಚಡಪಡಿಸಿದಂತೆ!


8.)ಪರಿಸರದ ಸಮೀಕರಣಕ್ಕೆ ಪ್ರಮೇಯ ಬೇಕೆ ?


 9.)ಕಾಫಿಯ ಕೆನೆಯಲ್ಲಿ ಕಾಪಿಟ್ಟ ಕವಿತೆ ಕಹಿಯಾದರೂ, ಕಲೆಯೇ! 


10.)ಯಜ್ಞಕ್ಕೆ ಹವಿಸ್ಸಿದ್ದಂತೆ ಪ್ರಜ್ಞೆಗೆ ಪ್ರಾಣಾಯಾಮ


©️Geethalakshmi Kochi

No comments:

Post a Comment

ಗೀತಳ ಗೀಚು

1.) ಬದುಕು ಬಣ್ಣಗಳಲ್ಲಿ.... 2)ಕಲೆಗೆ ದೃಷ್ಟಿಯ ಪರಿವೆಯಿಲ್ಲ ಅದು ದೃಷ್ಟಿಕೋನ !  3.)ಆಯಾಮದ ಅನುಮಾನ ಅನುಭೂತಿಗೇಕೆ ? 4.)ಸಾಲುಗಳಲ್ಲಿಲ್ಲದ ಅಚ್ಚುಕಟ್ಟು ಸರಳ ರೇಖೆಯಲ್ಲ...