1.) ಬದುಕು ಬಣ್ಣಗಳಲ್ಲಿ....
2)ಕಲೆಗೆ ದೃಷ್ಟಿಯ ಪರಿವೆಯಿಲ್ಲ
ಅದು ದೃಷ್ಟಿಕೋನ !
3.)ಆಯಾಮದ ಅನುಮಾನ ಅನುಭೂತಿಗೇಕೆ ?
4.)ಸಾಲುಗಳಲ್ಲಿಲ್ಲದ ಅಚ್ಚುಕಟ್ಟು ಸರಳ ರೇಖೆಯಲ್ಲಿತ್ತು
ನನಗೆ ಮಾತ್ರ ಅಂಕುಡೊಂಕಿನ ಸಾಲು ನೆಚ್ಚಿತು !
5.)ಪರಿಸರವಷ್ಟೇ ಸಮತೋಲನ, ಮಿಕ್ಕಿದ್ದೆಲ್ಲ ಆಂದೋಲನ.
6.)ಪಾತರಗಿತ್ತಿಯ ಪುಕ್ಕ ಹತ್ತಿದ ಪರಿವೆಗೆ ರೂಪಾಂತರದ ರೋಮಾಂಚನ
7.)ಜಟಿಲತೆಯ ಪಥದಲ್ಲಿ ಪುಟಿದೆದ್ದ ಚಿಟಿಕೆ ಕಿಡಿ
ಮತ್ತೆ ಚಡಪಡಿಸಿದಂತೆ!
8.)ಪರಿಸರದ ಸಮೀಕರಣಕ್ಕೆ ಪ್ರಮೇಯ ಬೇಕೆ ?
9.)ಕಾಫಿಯ ಕೆನೆಯಲ್ಲಿ ಕಾಪಿಟ್ಟ ಕವಿತೆ ಕಹಿಯಾದರೂ, ಕಲೆಯೇ!
10.)ಯಜ್ಞಕ್ಕೆ ಹವಿಸ್ಸಿದ್ದಂತೆ ಪ್ರಜ್ಞೆಗೆ ಪ್ರಾಣಾಯಾಮ
©️Geethalakshmi Kochi
No comments:
Post a Comment