Saturday 23 December 2017

ವಿನಂತಿ...

ಬಾಡದಿರು ಮುದುಡದಿರು
ಓ ನನ್ನ ಮನವೆ
ಸೋಲಿನಲಿ ಮರುಗಿದರೆ
ನೀನೆಲ್ಲಿ ಉಳಿದೆ

ಆಗು ನಂದಾದೀಪ ನೀ
ಬೆಳಗು ನನ್ನನ್ನು
ನನ್ನತನದ ಕಿರುಬೆಳಕೆ
ಆರದಿರು ನೀನು

ದಿನ ದಿನವು ನೀ ಬೆಳಗಿ
ಗುರಿಯ ತೋರು
ತೆರೆದು ತೋರೆದೆಗೆ ನೀ
ಕನಸ ತೇರು

ಆಮಿಷವು ಹಲವಿಹವು
ಕತ್ತಲಿನ ಬಲಕೆ
ನಿನ್ನನೇ ನಂಬಿಹೆನು
ಬಾ ನನ್ನ ಬೆಂಬಲಕೆ

ಭಾವನೆಯ ತೈಲವನೆ
ಎರೆಯುವೆನು ನಿನಗೆ
ಬೆಳಕು ಪಸರಿಸಬೇಕು
ನನ್ನ ಒಳಗೆ


~Geethalakshmi Kochi

1 comment:

ಗೀತಳ ಗೀಚು

1.) ಬದುಕು ಬಣ್ಣಗಳಲ್ಲಿ.... 2)ಕಲೆಗೆ ದೃಷ್ಟಿಯ ಪರಿವೆಯಿಲ್ಲ ಅದು ದೃಷ್ಟಿಕೋನ !  3.)ಆಯಾಮದ ಅನುಮಾನ ಅನುಭೂತಿಗೇಕೆ ? 4.)ಸಾಲುಗಳಲ್ಲಿಲ್ಲದ ಅಚ್ಚುಕಟ್ಟು ಸರಳ ರೇಖೆಯಲ್ಲ...