Monday 16 September 2019

Saturday 14 September 2019



ಬರಹ ಬಿಸಿಲಿದ್ದಂತೆ!
          ಬಸಿದಷ್ಟೂ ಬಿಸಿ,ಬಿತ್ತಿದಷ್ಟೂ ಬಿತ್ತರಿಸಿ
                  ಮತ್ತೆಲ್ಲವನ್ನೂ ಬತ್ತಿಸಿ ಹಬೆಯಾಗಿಸುತ್ತದೆ!🌻

~Geethalakshmi Kochi

Monday 20 May 2019

.................

ಭಾವಗಳ ಭಾವನೆಗೆ
ಲಯವಾಗೊ ಭಯವನ್ನು
ಅರಗಿಸದೆ ಅಡಗಿಸಿದೆ

ಬಂಧನಗಳಿಲ್ಲದ ಬದುಕಿನ
ಗಲ್ಲಿ ಗಲ್ಲಿ ,
ತಿರುಗಿದೆ ಬರಿಗಾಲಲ್ಲಿ

ಆ ಗಲ್ಲಿಗಳಲ್ಲಿ ದುಃಖ ಮಾತನಾಡಲಿಲ್ಲ
ಖುಷಿಗೆ ಕಣ್ಣು ಕಾಣುವುದಿಲ್ಲ
ಏಕತಾನತೆಯೊಂದು
ಹುಚ್ಚೆದ್ದು ಕುಣಿಯುತ್ತಿತ್ತು
ಹೂತಿಟ್ಟ ಭಾವನೆಗಳ ಕೆಣಕುತ್ತಿತ್ತು

ನನಗೆ ಸೋಲು ಒಗ್ಗಲಿಲ್ಲ
ನಾನೂ ರಟ್ಟೆ ತಟ್ಟಿದೆ
ಯುದ್ಧಕ್ಕೆ ಬದ್ಧಳಾದೆ
ಅಂತರಾತ್ಮ ಇಂದು ರಣರಂಗ

ಆದರೆ ಸಂಘರ್ಷದಲ್ಲಿ ಕೇವಲ
ನಾವೀರ್ವರಲ್ಲದೆ ಹಲವರ ದನಿಯಿತ್ತು
ಪ್ರತಿ ಗಲ್ಲಿಯ ಗುಲ್ಲಿತ್ತು

ಅಂತಃಕರಣ ಮತ್ತೆ ಮಿಡಿಯಿತು
ಓಹ್! ನಾನು ಬಂಧಿಸಿದ್ದು ಬಂಧನಗಳನಲ್ಲ
ಬಂಧಗಳನ್ನು!

ರಕ್ತಸಿಕ್ತ ಭಾವನೆಗಳನ್ನು ಕಂಡು
ಮುಲಾಮು ಹಚ್ಚಲು ಶುರುವಿಟ್ಟೆ
ಸಂಘರ್ಷದಲಿ ಸೋಲೊಪ್ಪಿದೆ
ಆದರೂ ದುಃಖವಿಲ್ಲ
ಗೆದ್ದೆ ಅನಿಸುತ್ತಿದೆ!!!!

~Geethalakshmi Kochi

Tuesday 18 December 2018

ಅವಳ ನೆನಪಿನಲ್ಲಿ

ಇಂದೇಕೋ ಅವಳು ನೆನಪಾಗಿದ್ದಾಳೆ
ಒಂಟಿ ಕಣ್ಣಿನಿಂದ ಸರಕ್ಕನೆ
 ಹರಿದ ಹನಿಗೆ ನೆಪವಾಗಿದ್ದಾಳೆ

ಉಣ್ಣುವ ಅನ್ನದ ತುತ್ತಿನಲ್ಲಿ
ನೀರು ದೋಸೆಯ ತೂತಿನಲ್ಲಿ
ಬಿಸಿ ಹಾಲಿನ ನೊರೆಯಲ್ಲಿ
ತಟ್ಟೆಯ ತುಪ್ಪದ ಘಮದಲ್ಲಿ
ತನ್ನನ್ನು ಹುಡುಕಿಸುತ್ತಿದ್ದಾಳೆ!

ಒಗ್ಗರಣೆಯ ಸಾಸಿವೆಯ ಚಿಟಿಚಿಟಿಯಲ್ಲಿ
ಮಾವಿನ ಮಿಡಿಯ ಉಪ್ಪಿನಕಾಯಿಯಲ್ಲಿ
ವೆನಿಲ್ಲಾ ಐಸ್ ಕ್ರೀಮ್ ನ ಡಬ್ಬದಲ್ಲಿ
ಮೊಸರ ಮೇಲೆ ತೇಲುವ ಕೆನೆಯಲ್ಲಿ
ತನ್ನನ್ನು ಹುಡುಕಿಸುತ್ತಿದ್ದಾಳೆ!

ಅರಳಿದ ಗುಲಾಬಿ ಹೂವಿನಲ್ಲಿ
ಹಳೆಯ ಕರವಸ್ತ್ರದ ಅಂಚಿನಲ್ಲಿ
ಮುದುಡಿದ ನೂರರ ನೋಟಿನಲ್ಲಿ
ಕದಡಿದ ನನ್ನೆದೆಯಾಳದಲ್ಲಿ
ನನ್ನಜ್ಜಿ ನಗುನಗುತ ತನ್ನನ್ನು
 ಹುಡುಕಿಸಿದ್ದಾಳೆ!

ಇತ್ತೀಚಿಗೇಕೋ ಅವಳು ನೆನಪಾಗುತ್ತಿದ್ದಾಳೆ
ಒಂಟಿ ಕಣ್ಣಿನಿಂದ ಸರಕ್ಕನೆ
ಹರಿದ ಹನಿಗೆ ನೆಪವಾಗಿದ್ದಾಳೆ!

~Geethalakshmi Kochi

Thursday 16 August 2018

ಅವನ ಬೆಳಕಿನಲ್ಲಿ



ಇಂದು ನನಗಾಗಿ ಅವನುರಿಸಿದ ಜ್ಯೋತಿ
ಬೆಳಗಲಿಲ್ಲ ;  ಬದಲಾಗಿ ಪ್ರಜ್ಞಲಿಸಿತು!
ಸುತ್ತಲ ಕತ್ತಲೆಯಷ್ಟೇ ಸರಿಸಲಿಲ್ಲ ,
ಜಗದಗಲದ ಹೊಳಹು ನನ್ನೊಳಗೆ ತೂರಿಸಿತು !!

ಈ ಬೆಳಕನ್ನು ಬೀರುತ್ತಿರುವುದು ದೀವಿಗೆಯೋ ?
ಅಲ್ಲ... ಅವನ ಮೊಗದ ಮಂದಹಾಸ ?
ಇಂದೇಕೋ ತಬ್ಬಿಬ್ಬಿನಲೂ ಬೆಳಕಿನ ಭಾಸ
ಇದೆಂತಹಾ ಆಭಾಸ .....??

ಅಷ್ಟರಲ್ಲಿ ಅವನು ನನ್ನತ್ತ ಹೆಜ್ಜೆ ಬೆಳೆಸಿದ
ನನ್ನ ಹತ್ತಿರ ಬಂದ!
ಹಾಂ, ಇನ್ನಷ್ಟು.. ಹೌದು,ಮತ್ತಷ್ಟು,

ಕಳೆದ ಬಾರಿ ನಾನು ಹುಟ್ಟುವಾಗ
ಇದೇ ಬೆಳಕ ಕಂಡಿದ್ದೆ
ನನ್ನ ಅಮ್ಮನ ನೋವು ನಲಿವು
ಅವಳಪ್ಪುಗೆಯಲರಿತಿದ್ದೆ

ಮತ್ತದೇ ಅನುಭವ???

ಓಹ್, ಸಾವೂ ಇಷ್ಟು ಮನೋಹರವೇ..?
ಅವನ ಕಿವಿಯಲ್ಲಿ ಪಿಸುಗುಟ್ಟಿದೆ
ಅವನೊಮ್ಮೆ ನನ್ನ ದಿಟ್ಟಿಸಿದ

ನನ್ನ ಮುಪ್ಪಿನ ನರೆ ಮಾಜಿದಂತಿದೆ
ನನ್ನುಸಿರು ಅವನುಸಿರಿನಲಿ ಬೆರೆತಂತಿದೆ
ಪ್ರೀತಿಯಿಂದ ನನ್ನ ನೆತ್ತಿಯನ್ನವನು ಚುಂಬಿಸಿದ
ಅವನ ಆಲಿಂಗನದಲೆಲ್ಲೋ ತೇಲಿಸಿದ.

~Geethalakshmi Kochi

Tuesday 3 July 2018

ನಡೆದಷ್ಟು ದಾರಿ...





ಭಾಗ-೦೩


            ನಾವು ಒಂದಷ್ಟು ದೂರ ಹುಡುಕುತ್ತಾ ನಡೆದೆವು. ಎಲ್ಲೂ ಯಾವುದೇ ಬೆಳಕಿರಲಿಲ್ಲ.  ಸುತ್ತಮುತ್ತ ಕಾಡಲ್ಲದಿದ್ದರೂ ಮರ,ಗಿಡ, ಪೊದೆಗಳಿಂದ ಆವೃತ ಪ್ರದೇಶವಾಗಿತ್ತು.ಯಾವುದೇ ಮನೆ ಇರಲಿಲ್ಲ.ಸಾಲದ್ದಕ್ಕೆ ನೆಟ್ವವರ್ಕ್ ಇರ್ಲಿಲ್ಲ. ತುಂಬಾ ಚಳಿ ಇತ್ತು."ನೀವ್ಯಾಕೆ ಇಲ್ಲಿ ಬಂದ್ರಿ" ಎಂದು ಬಲಭಾಗದಿಂದ ಶಬ್ದ ಬಂತು. ತಿರುಗಿ ನೋಡಿದರೆ ಆರ್ಯಾಹಿ.
        "ನೀನ್ಯಾಕೆ ಬಂದೆ?ಅದೂ ಹೇಳ್ದೆ,ಕೇಳ್ದೆ. ಈ ಕತ್ತಲೆಯಲ್ಲಿ ನಿನ್ನನ್ನು ಹುಡುಕುವುದಾದರೂ ಹೇಗೆ?ಎಷ್ಟು ಭಯ ಪಟ್ವಿ ಗೊತ್ತಾ?"ಅಂದೆ ಸ್ವಲ್ಪ ಗದರಿಸಿ. ಆರ್ಯಾಹಿ ನಗ್ತಾ ಹೇಳಿದ್ಲು" ಈ ಕಾರಣದಿಂದ್ಲೇ ಸರಿ. ನೀವಿಬ್ಬರೂ ನಿಮ್ಮದೇ ಜಗತ್ತಿನಿಂದ ಹೊರ ಬಂದ್ರಿ."
"ನೀನು ಯಾವತ್ತಿದ್ರೂ ನಿನ್ನ ತಪ್ಪು ಒಪ್ಪುವವಳೇ ಅಲ್ಲ.ಇಲ್ಲಿಂದ ಹೋಗೋಣ. ಹಸಿವು  ಬೇರೆ ಆಗ್ತಿದೆ ಅಂದ ಆದಿತ್ಯ.
"Okay.ಹೋಗುವಾಗ ಎರಡೆರಡು ಕಟ್ಟಿಗೆ ಎತ್ತಿಕೊಳ್ಳಿ "ಅಂದ್ಲು ಆರ್ಯಾಹಿ. ಕಾರಿನ ಹತ್ತಿರ ಆ ಕಟ್ಟಿಗೆ ರಾಶಿ ಹಾಕಿ ಮೆಲ್ಲ ಬೆಂಕಿ ಉರಿಸಿದಳು ಆರ್ಯಾಹಿ.
ಆ ಬೆಂಕಿ ಮನಸ್ಸಿನ ನೋವು, ದ್ವೇಷ, ಬೇಸರಗಳನ್ನು ಉರಿಸಲೆತ್ನಿಸಿದಂತೆ ತೋರಿತು ಒಳ ಮನಸ್ಸಿಗೆ.ಅಷ್ಟರಲ್ಲಿ ಆರ್ಯಾಹಿ"I think it's time to talk.I can figure out that so much is going on and you guys also want to talk..exactly ನಾವು ಮೊದಲು ಮಾತನಾಡಿದ ಹಾಗೆ.." ಅಂದಳು.
 "ಹುಂ.ತುಂಬಾ ಇದೆ ಮಾತನಾಡಲು..ಆದರೆ exactly ಏನು ಎನ್ನುವುದು ನನಗೂ ಗೊತ್ತಿಲ್ಲ. ನಾನು 4 top    ಕಾಲೇಜಿನಲ್ಲಿ ಓದಿ , ತುಂಬಾ ಒಳ್ಳೆಯ ಕೆಲಸ ದೊರೆತರೂ ಅದ್ರಿಂದ ಅಂಥಾ ಖುಷಿ ಸಿಗ್ತಾ ಇಲ್ಲ.ಸ್ಲೀಪಿಂಗ್ ಪಿಲ್ಸ್ ಇಲ್ಲದೆ ನಿದ್ದೆ ಬರ್ತಾ ಇಲ್ಲ."ಎಂದು ಆದಿತ್ಯ ಹೇಳಿದ.

"ಐ ಥಿಂಕ್ ಇಟ್ಸ್ ಜಸ್ಟ್ ದ ಟೈಮ್. ಯು ಆಲ್ಪೇಸ್ ಆಂಡ್ ಆಲ್ವೇಸ್ ಲಿವ್ಡಡ್ ಅಂಡರ್ ಪ್ರೆಶರ್.ರಿಲಾಕ್ಸ್,ಯು ಆರ್ ಆನ್ ಅ ಬ್ರೇಕ್ ಆಲ್ ರೆಡಿ.ಎಲ್ಲಾ ಸರಿಯಾಗ್ತದೆ "ಅಂದಳು ಆರ್ಯಾಹಿ.
ನಾನು ನಗ್ತಾ ಹೇಳಿದೆ-"ಆರ್ಯಾ,ಯು ಆಲ್ವೇಸ್ ನೊ ವಾಟ್ ಟು ಸೆ"
ಅವಳು ಅದಕ್ಕೆ ಮಣಿ ಪೋಣಿಸಿ ಹೆಣೆದಂತೆ ಹೇಳಿದ್ಲು,"ಎಸ್.ಐ ಥಿಂಕ್ ಇವನ್ ಯು ಶುಡ್ ಓಪನ್ ಅಪ್.ನನ್ನ ಹತ್ರ ನಿನ್ನ ಪ್ರಾಬ್ಲಮ್ಗಗೂ ಸೊಲ್ಯೂಷನ್ ಇರ್ಬಹುದೇನೋ.."
"ಹುಂ.. Sure.. ಗಂಟೆ ಬೆಳಗ್ಗಿನ 3.ನಾವು ಹೊರಡೋಣ.ಟೈಮ್ ಇದೆ ತಾನೇ?ಹೇಳ್ತೀನಿ ಬಿಡು"ಅಂದೆ.

ನಾವು ಮತ್ತೆ ಹೊರಟೆವು.. ದಾರಿ ಈಗ ಮತ್ತಷ್ಟು ಆಪ್ಯಾಯಮಾನವಾದಂತಿತ್ತು.....



       *********************************

           ~Geethalakshmi Kochi








Sunday 17 June 2018

ನಡೆದಷ್ಟು ದಾರಿ...

ಬದುಕಿನ ಜಾಡು ಹಿಡಿದು
ಭಾಗ -೨

ಕೊನೆಗೂ ಯಾತ್ರೆ ಶುರುವಾಗಿತ್ತು. ಮಾತು ಮಾತ್ರ ಶುರು ವಾಗಲೇ ಇಲ್ಲ.ಸಂಜೆ ಮೆಲ್ಲಗೆ ಇರುಳ ತೆಕ್ಕೆಗೆ ಜಾರುತ್ತಿತ್ತು.

ಆರ್ಯಾಹಿ ಒಬ್ಳನ್ನು ಬಿಟ್ಟು ನಾವಿಬ್ಬರೂ ಏನೇ ವಿಷಯ ಇರ್ಲಿ,ನೂರು ಬಾರಿ ಯೋಚಿಸಿದವರು.ಸಾವಿರ ಬಾರಿ ಪರಾಮರ್ಶೆ ಮಾಡುವವರು. ಫ್ಯೂಚರ್ ಸೆಕ್ಯೂರ್ ಮಾಡ್ಬೇಕು ಅನ್ನುವ ಒಂದೇ ಒಂದು ಬಾಟಮ್ ಲೈನ್ ಇಟ್ಕೊಂಡು ಹಗಲು ರಾತ್ರಿ ದುಡಿದವರು.
     ಆದರೆ ಯಾಕೋ!ನನಗೆ ಈ trip ಪ್ಲಾನ್ಡ್ ಆಗಿರ್ಬೇಕು ಅಂತನ್ನಿಸಲಿಲ್ಲ.ಅಷ್ಟರಲ್ಲಿ ಸರಕ್ಕನೆ ನಾಯಿ ಮರಿ road ದಾಟಿದರ ಫಲವಾಗಿ ಆರ್ಯಾ ಹಟಾತ್ತನೆ brake ಹಾಕಿದ್ಹು,ಕಾರಿಗೆ ಮತ್ತೆ ನನ್ನ ಯೋಚನೆಗೆ!!
        ಆದಿಯೂ ಅಷ್ಟೇ. ತನ್ನದೇ ಪ್ರಪಂಚದಲ್ಲಿ ಇದ್ದ ಆತ ಈಗ ನೂರಾರು ಪ್ರಷ್ನೆಗಳನ್ನು ಒಂದೇ ಉಸಿರಿಗೆ ಕೇಳಿದ.
ಎಲ್ಲಿಗೋಗ್ತಾ ಇದ್ದೇವೆ?
ಹೇಗೆ ಹೋಗ್ತಾ ಇದ್ದೀವಿ?
ಯಾವ ರೋಡ್? etc etc etc.
ಆದ್ರೆ ಆರ್ಯ ಉತ್ತರ ಕೊಡಲಿಲ್ಲ. ವಿಷಯವನ್ನು ಹಾರಿಕೆಯಲ್ಲೇ ಮರೆಯಾಗಿಸಿದಳಾಕೆ.
      ರೋಡ್ NH48 ಅಂತ ಗೊತ್ತಾಯ್ತು.ರಾತ್ರೆ ಸುಮಾರು 10 ಗಂಟೆ ಸಮಯ.ಸ್ವಲ್ಪ ಹೊತ್ತಿನ ಬಳಿಕ ಮುಂದೆ ಹೋಗೋಣ ಎಂದು ಅಲ್ಲಿಂದ ಆಚೆಗಿನ ಜನನಿಬಿಡ ಜಾಗಕ್ಕೆ ತೆರಳಿದೆವು.
ಆರ್ಯಾ ಕಾರಿಂದ ಕೆಳಗಿಳಿದ್ರೆ ನಾವು ಮೆಲ್ಲ ಮಾತಿಗಿಳಿದೆವು.
"Even though we always wanted to be on the same page right now we are on the different books .ಆರ್ಯಾಹಿ ಅವತ್ತು ಮನೆ ಬಿಟ್ಟು ಹೋದಾಗ ಡಿಪ್ರೆಷನ್ ಅಂದ್ಕೊಂಡೆ.But it takes a lot of courage."ಅಂದ ಆದಿ.
"Are we jealous of her lifestyle?"  ಎಂದೆ.
ಅಸೂಯೆ ಅಲ್ಲ;ಆಸೆ. ಸ್ವಚ್ಛಂದವಾಗಿ ಬದುಕಲು. ಯಾರಿಗೂ ಯಾವುದೇ ಜಸ್ಟಿಫಿಕೇಷನ್ ಕೊಡದೆ ನಮ್ಮದೇ ಸಾಮ್ರಾಜ್ಯದ ದೊರೆಯಾಗಲು.ಇನ್ನೊಬ್ಬರ ಅರಮನೆಯ servant ಆಗುವುದಕ್ಕಿಂತ ನಮ್ಮದೇ ಗುಡಿಸಲಿನಲ್ಲಿ ರಾಜನಾಗುವುದು ಒಳ್ಳೆಯದು.
ಏನೋ ಶಬ್ದ ಕೇಳಿ ಹೊರಗಿಳಿದ್ರೆ ಅಲ್ಲಿ ಆರ್ಯಾಹಿ ಇರ್ಲಿಲ್ಲ. ಮನಸ್ಸಿನಲ್ಲಿ ನೂರು ಪ್ರಷ್ನೆ,ಭಯ,ಆತಂಕ, ಗಾಬರಿ. ಚಿಕ್ಕಂದಿನಲ್ಲಿ ಒಮ್ಮೆ ಅವಳು  ಕಾಣೆಯಾಗಿ ಊರಿಡೀ ಹುಡುಕಿದ ನೆನಪಾಯ್ತು. ಕ್ಯಾಮೆರಾ ಬಿಟ್ಟು ಹೋದುದರಿಂದ ಎಲ್ಲೂ ಹೋಗಿರಲಿಕ್ಕಿಲ್ಲ ಎಂಬ ಹುಂಬ ಧ್ಯೈರ್ಯ.


ಆದರೆ ನಮ್ಮಲ್ಲಿ ನಾವೇ ಕಳೆದು ಹೋಗಿರುವಾಗ ಅವಳನ್ನು ಹುಡುಕುವುದಾದರೂ ಹೇಗೆ???

           
               *********************
                                           (ಮುಂದುವರಿಯುತ್ತದೆ)

~Geethalakshmi Kochi







ಗೀತಳ ಗೀಚು

1.) ಬದುಕು ಬಣ್ಣಗಳಲ್ಲಿ.... 2)ಕಲೆಗೆ ದೃಷ್ಟಿಯ ಪರಿವೆಯಿಲ್ಲ ಅದು ದೃಷ್ಟಿಕೋನ !  3.)ಆಯಾಮದ ಅನುಮಾನ ಅನುಭೂತಿಗೇಕೆ ? 4.)ಸಾಲುಗಳಲ್ಲಿಲ್ಲದ ಅಚ್ಚುಕಟ್ಟು ಸರಳ ರೇಖೆಯಲ್ಲ...