ಬದುಕಿನ ಜಾಡು ಹಿಡಿದು
ಭಾಗ-೧
ಅವತ್ಯಾಕೋ ಅಚಾನಕ್ಕಾಗಿ ಮಳೆ ಸುರೀತು.ಮನೆ ಮಾಡಷ್ಟೇ ಅಲ್ಲ;ಮನಸ್ಸೂ ಸೋರುತ್ತಿತ್ತು.ನಾವು ಮೂವರೂ ಜೊತೆಗೇ ಇದ್ವಿ.ನಾವು ಅಂದ್ರೆ ಆದಿತ್ಯ, ಆರ್ಯಾಹಿ ಮತ್ತು ನಾನು-ಅಷ್ಮಾಯು.ನಾವು ಕಸಿನ್ಸ್. ಒಬ್ಬರಿಗೊಬ್ಬರು ಜೀವ. ನಾಲ್ಕು ವರ್ಷಗಳ ನಂತರ ಸಿಗ್ತಾ ಇದ್ದೇವೆ.
ಆದಿತ್ಯ ಇಂಜಿನಿಯರಿಂಗ್ ಮಾಡಿ ಅಮೇರಿಕಾದಲ್ಲಿ ಸೆಟ್ಲ್ಲಾದವನು.ನಾನು ಎಂ.ಬಿ.ಎ ಮಾಡಿ
ಬೆಂಗಳೂರಿನಲ್ಲೇ ಇದ್ರೆ ಆರ್ಯಾಹಿ ಎಲ್ಲಿರ್ತಾಳೆ ಅಂತ ಯಾರಿಗೂ ಐಡಿಯಾ ಇರ್ಲಿಲ್ಲ.೧೦ನೇ ತರಗತಿಯ ನಂತ್ರ ತನ್ನ ಕ್ಯಾಮೆರಾ ಜೊತೆ ಮನೆ ಬಿಟ್ಟವಳು ವಾಪಸ್ಸು ಬಂದದ್ದು ಇವಾಗ್ಲೆ. ಆವಾಗ ಇವಾಗ ಕಾಲ್ ಮಾಡ್ತಾ ಇದ್ರೂ ಇವಳೆಲ್ಲಿದ್ದಾಳೆ ಅಂತ ಹೇಳ್ತಾನೆ ಇರ್ಲ್ಲಿಲ್ಲ. ಪೇರೆಂಟ್ಸ್ ಬೆಂಗಳೂರಿನಲ್ಲಿದ್ರೂ ನಾವು ನಮ್ಮ reunion
ಪ್ಲಾನ್ ಮಾಡಿದ್ದು ಕೊಡಗಿನ ಒಂದು ಹಳೇ ಮನೆಯಲ್ಲಿ.
ಆಗ್ಲೇ ಮಳೆ ಬರ್ತಾ ಇದೆ ಅಂದ್ನಲ್ಲ.ಆದ್ರೆ ಆ ಫೀಲಿಂಗ್ ಇರ್ಲಿಲ್ಲ.ಮಳೆ ಝಲ್ಲೆನಿಸಲಿಲ್ಲ!!ಗುಡುಗೂ ಹೆದರಿಸಲಿಲ್ಲ.ಕನಸು?ಮೊದಲೇ ಕರಗಿತ್ತಲ್ಲ.ಚಿಗುರುವ ಹಾಗೆ ಕಾಣಿಸಲಿಲ್ಲ. ಹೀಗಿರುವಾಗ ನಿಮ್ಗೇ ನಮ್ಮ ಮೂವರ
ಲೈಫಲ್ಲು ಏನೇನೋ ಪ್ರಾಬ್ಲಮ್ಸ್ ಇದೆ ಅಂತ ಗೊತ್ತಾಗುವಾಗ ನಮ್ಗೂ ಗೊತ್ತಾಗ್ಲೇ ಬೇಕು!
ಸಡನ್ನಾಗಿ ಆರ್ಯಾಹಿ "ಬ್ಯಾಗ್ ಪ್ಯಾಕ್ ಮಾಡಿ, ಸಂಜೆ 6:30ಕ್ಕೆ ಹೊರಡೋಣ" ಅಂದ್ಳು.
ಎಲ್ಲಿ??
ಗೊತ್ತಿಲ್ಲ..
ಯಾಕೆ???
ಬದುಕು ಒಂದು ಪಯಣ ಎನ್ನುವುದು ಎಲ್ಲರೂ ಕೇಳಿರುವ ಫಿಲಾಸಫಿ. ಅದ್ರಲ್ಲಿ ಎಳ್ಳಷ್ಟಾದ್ರೂ ನಿಜ ಆಗಿದ್ರೆ ನಮ್ಗೆ ಈ ಪ್ರಯಾಣದಿಂದ ಏನಾದ್ರೂ ಸೊಲ್ಯೂಷನ್ ಸಿಗ್ಲೇ ಬೇಕು ಅಂದ್ಕೊಂಡೆ.
ಹೇಗಿದ್ರೂ ಮೂವರ ಬದುಕಲ್ಲೂ ಅರೆ ಕತ್ತಲೆ ಕವಿದಿರುವಾಗ ಅರೆಬೆಳಕ ಹಾದಿಯ ಯಾತ್ರೆ ಶುರುವಾಗ್ಲೇ ಬೇಕಿತ್ತು.
(ಮುಂದುವರಿಯುತ್ತದೆ)
************************
~Geethalakshmi Kochi
~Geethalakshmi Kochi
Nice story geetha!
ReplyDeleteKeep writing
Interesting... Waiting for next part...
ReplyDeletewoww interesting story i wating for next part
ReplyDelete