Friday 16 March 2018

ಅಡಿಗರಿಗೆ...

ಕಟ್ಟುಪಾಡಿನ ಕಟ್ಟೆಯನ್ನೊಡೆದು
ಕಟ್ಟಿದಿರಿ ಹೊಸತೊಂದು ಕಾವ್ಯಪ್ರಪಂಚ
ನವ ನವ್ಯ  ಬಿತ್ತಿದಿರಿ;ಭವ್ಯತೆಯ ಪರಾಕಾಷ್ಠೆ --  ಯನೂ ಮೀರಿಸಿ
ಬರಹಕ್ಕೆ ನೀಡಿ ಹೊಸ ಕಾವ್ಯಮಂಚ

ಕಾವ್ಯಾಂತರಂಗದಲಿ ಭಾವಾಂತರಂಗ ಮೂಡಿಸುತ ತುಂಬಿದಿರಿ ನೂರಾರು ರಂಗುರಂಗ
ಕವಿತೆ ಕಟ್ಟುವ ಬದಲು ನವ ಕಾವ್ಯ ಹುಟ್ಟಿಸುತ
ಉರಿಸಿದಿರಿ ಎದೆಯೊಳಗೆ ಹೊಸತೊಂದು ಕಿಚ್ಚ

ಭೂಮಿ ಗೀತೆಯ ಹಾಡಿದಿರಿ ,ಮೋಹನ ಮುರಳಿಯ ಕರೆಯ ಕೇಳಿಸಿದಿರಿ  ಚಿಂತಾಮಣಿಯಲ್ಲಿ ಕಂಡ ಮುಖವ
ಬಣ್ಣಿಸಿದಿರಿ

ತಾವಿಟ್ಟ ಪ್ರತಿಯಡಿಯಲ್ಲೂ
ಬೆಳೆಯುತ್ತಲೇ ಹೋದಿರಿ
ಕನ್ನಡ ಕಾವ್ಯ ಕೃಷಿಯನ್ನು
ಬೆಳೆಸುತ್ತಲೇ ಹೋದಿರಿ
ಮತ್ತೆ, ಕನ್ನಡ ಕಾವ್ಯದ ಕಂಪ
ಪಸರಿಸುತ್ತಲೇ ಹೋದಿರಿ

~Geethalakshmi Kochi


No comments:

Post a Comment

ಗೀತಳ ಗೀಚು

1.) ಬದುಕು ಬಣ್ಣಗಳಲ್ಲಿ.... 2)ಕಲೆಗೆ ದೃಷ್ಟಿಯ ಪರಿವೆಯಿಲ್ಲ ಅದು ದೃಷ್ಟಿಕೋನ !  3.)ಆಯಾಮದ ಅನುಮಾನ ಅನುಭೂತಿಗೇಕೆ ? 4.)ಸಾಲುಗಳಲ್ಲಿಲ್ಲದ ಅಚ್ಚುಕಟ್ಟು ಸರಳ ರೇಖೆಯಲ್ಲ...